ನಮ್ಮೆಲ್ಲರ ಮನೆಗಳಲ್ಲಿ, ದೇವಾಲಯಗಳಲ್ಲಿ ಸಾತ್ವಿಕ ಶ್ರೀ ಚಕ್ರದ ಪೂಜಾನುಷ್ಠಾನ, ಅರ್ಚನೆಗಳು ಈ ದಿನ ಸಾಮಾನ್ಯವಾಗಿ ಕಾಣಸಿಗುತ್ತದೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಶ್ರೀ ಚಕ್ರದ ಶಕ್ತಿ ಅದ್ಭುತ, ಅದಕ್ಕೆ ದೇವಿಯ ಸ್ವರೂಪಗಳ, ಸಾಮಾನ್ಯರಿಗೆ ಕೊಡುವ ರಕ್ಷಣೆಗಳ ಹೊರತಾಗಿಯೂ ಅನೇಕ ಅನೇಕ ವಿವರಣೆಗಳನ್ನು ಒಬ್ಬರು ಒಂದೊಂದು ರೀತಿಯಲ್ಲಿ ಈ ಯಂತ್ರವನ್ನು ವಿವರಿಸುತ್ತಾರೆ. ಆದರೆ ನನಗೆ ಈ ಸಾತ್ವಿಕ ಶ್ರೀ ಚಕ್ರವನ್ನು ಶ್ರೀ ಶ್ರೀ ಶಂಕರಾಚಾರ್ಯರು ತಮ್ಮ ಅದಮ್ಯ ಭಕ್ತಿ, ದೈವೀ ಪ್ರೀತಿ, ಬುದ್ಧಿವಂತಿಕೆ, ಪಾಂಡಿತ್ಯದಿಂದ ರಚಿಸಿದ ಕಥೆ ಎಷ್ಟು ಭಾರಿ ಓದಿದರು ರೋಮಾಂಚಕ ಎನಿಸುತ್ತದೆ.
ನನ್ನ ಹಿಂದಿನ ಬರವಣಿಗೆಯಲ್ಲಿ ಮೂಲ ಶ್ರೀ ಚಕ್ರದ ಉದ್ಭವದ ಕುರಿತಾದ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈ ದಿನ ಸಾತ್ವಿಕ ಶ್ರೀ ಚಕ್ರದ ರಚನೆಯ ಕುರಿತಾದ ಕಥೆಯನ್ನು ಬರೆಯಬೇಕೆಂದು ನೆನೆಸಿದ್ದೇನೆ.
ಶ್ರೀ ಶ್ರೀ ಶಂಕರರಿಗೆ ಶೃಂಗ ಗಿರಿಯಲ್ಲಿದಾಗ ಮೂಲ ಶ್ರೀ ಚಕ್ರದಿಂದಾಗುತ್ತಿದ್ದ ಮಾಂಸಾನ್ನ ಬಲಿಗಳು ತಿಳಿದು, ಆಚಾರ್ಯರು ಇದನ್ನು ನಿಲ್ಲಿಸಲೇಬೇಕೆಂದು ಮಧುರೆಗೆ ಬಂದಿದ್ದರು. ಪಾಂಡ್ಯ ರಾಜ ಅವರನ್ನು ಸ್ವಾಗತಿಸಿ, ಸತ್ಕರಿಸಿ, ಸೇವೆ ಸಲ್ಲಿಸಿದ ಬಳಿಕ ಸಾಯಂಕಾಲ ಶಂಕರರು ಕೇಳುತ್ತಾರೆ, ರಾಜನ ಅರಮನೆಯಲ್ಲಿ ತಂಗಲಾಗುವುದಿಲ್ಲ, ಯಾವ ಗೃಹಸ್ಥನ ಮನೆಯಲ್ಲೂ ಆಗದು, ಮಧುರೆಗೆ ಬಂದಿದ್ದೇನೆ, ಮೀನಾಕ್ಷಿಯ ದೇವಾಲಯದಲ್ಲಿ ವಿಶ್ರಮಿಸುತ್ತೇನೆ ಎಂದು, ಆಗ ರಾಜ ತಿಳಿಸಿ ಹೇಳುತ್ತಾನೆ. ಆಚಾರ್ಯರೆ ಮೀನಾಕ್ಷಿ ಸೂರ್ಯಾಸ್ತವಾದೊಡನೆ ರಕ್ತಾಕ್ಷಿಯಾಗಿ ಕಂಡು ಕಂಡಲ್ಲಿ ಕಂಡು ಕಂಡವರನ್ನೆಲ್ಲ ಭಕ್ಷಿಸುತ್ತಾಳೆ ಎಂದು, ಆಗ ಶ್ರೀ ಶ್ರೀ ಶಂಕರರು ನಾನು ಬಂದಿದ್ದೆ ಆ ತಾಯಿಯನ್ನು ನೋಡಲಿಕ್ಕೆ ಎಂದು ನಗುತ್ತಾ ಹೇಳಿದರು. ಪಾಂಡ್ಯ ರಾಜ ಎಲ್ಲ ಸಿದ್ಧತೆಯೊಂದಿಗೆ ಮೇಣೆಯಲ್ಲಿ ಆಚಾರ್ಯರನ್ನು ದೇವಾಲಯಕ್ಕೆ ಕಳುಹಿಸಿಕೊಡುತ್ತಾನೆ. ಶ್ರೀ ಶಂಕರಾಚಾರ್ಯರು ದೇವಾಲಯಕ್ಕೆ ಬಂದು ಶ್ರೀ ದೇವಿಯ ಗರ್ಭಗುಡಿಯ ಮುಂದಿನ ಜಗುಲಿಯ ಮೇಲೆ ಪದ್ಮಾಸನದಲ್ಲಿ ಕುಳಿತರು. ಸೂರ್ಯಾಸ್ತವಾಗುತ್ತಿದ್ದಂತೆ ದೇಗುಲದ ಗಂಟೆಗಳು ತಾನೇ ಭಾರಿಸಿದವು ಮರಕತ ಶಿಲೆಯ ಮೀನಾಕ್ಷಿಯ ಮೂರ್ತಿಯಿಂದ ತಾಯಿ ಪ್ರಕಟವಾಗಿದ್ದಳು. ಪ್ರಕಾಶವಾದ ಪ್ರಭೆ, ಹೊಳೆಯುವ ಕಣ್ಣುಗಳು ಅತಿ ಸುಂದರವಾದ, ಪ್ರಶಾಂತವಾದ ವದನ ಕಂಡಿದ್ದ ಶಂಕರರಿಗೆ, ಮೀನಾಕ್ಷಿಯು ತನ್ನ ವಾಮ ಪಾದವನ್ನು ಹೊರ ಇಡುತ್ತಲೇ ಕರಾಳ ವದನ, ಕೃಷ್ಣ ಶರೀರ, ಕೆಂಪು ಕಣ್ಣುಗಳ ಹೂಂ..ಕಾರದ ಘರ್ಜನೆಯ ಬದಲಾವಣೆಯನ್ನು ಕಂಡರು. ಶ್ರೀ ಶ್ರೀ ಶಂಕರರು ಈ ಎಲ್ಲಾ ಬದಲಾವಣೆಯನ್ನು ಕಂಡು ಕಿಂಚಿತ್ತೂ ಹೆದರದೆ ಹೆತ್ತ ತಾಯಿಯ ಬಳಿ ಮಗುವಿರಬಹುದಾದ ವಿಶ್ವಾಸದಲ್ಲೆ ಕುಳಿತಿದ್ದಾರೆ.
ಮೀನಾಕ್ಷಿಯು ಹೊರ ಹೋಗುತ್ತಿರುವಾಗ ಶಂಕರರು ಹೇಳುತ್ತಿದ್ದ ಶ್ರೀ ಲಲಿತಾ ಸಹಸ್ರನಾಮಸ್ತೋತ್ರವನ್ನು ಕೇಳಿ ತಾಯಿ ಅಲ್ಲಿಯೇ ನಿಂತಳು.
ತಾಯಿ ಕೇಳುತ್ತಾಳೆ ಹೇ ಬಾಲವಟು ಯಾರು ನೀನು?. ತನ್ನ ಹೆಸರು ಹೇಳಿ ಪರಿಚಯ ಮಾಡಿಕೊಂಡರು. ದೊಡ್ಡವರ ಜೊತೆ ಮಾತನಾಡಿದ್ದು ಪರಿವಸಾನವಾಗ ಬೇಕು ಏನು ವರ ಬೇಕು ನಿನಗೆ ಕೇಳು ಎಂದಳು. ಶ್ರೀ ಶ್ರೀ ಶಂಕರರು, ಅಮ್ಮ ನಿನ್ನ ಸಹಸ್ರ ನಾಮಗಳನ್ನು ನಿನ್ನೆದುರೇ ಹಾಡಿ ನನಗೆ ತಿಳಿದ ಅರ್ಥ ಹೇಳಬೇಕು ಎಂದರು. ಮೀನಾಕ್ಷಿ ಒಪ್ಪಿ ನಿಂತಳು. ಶಂಕರರ ವಾಖ್ಚಾತೂರ್ಯ, ಭಕ್ತಿ, ಪ್ರೀತಿಯು ಮೀನಾಕ್ಷಿಯನ್ನು ಮೆಚ್ಚಿಸಿತ್ತು. ಇಷ್ಟು ಚೆನ್ನಾಗಿ ನನ್ನನ್ನು ಸ್ತುತಿಸಿದ್ದಕ್ಕಾಗಿ ಏನು ವರ ಬೇಕು ಎಂದು ಶಂಕರರಿಗೆ ದೇವಿ ಕೇಳಿದಳು. ಶಂಕರರು ಅಮ್ಮ ನಿನ್ನೊಂದಿಗೆ ನಾನು ಪಗಡೆ ಆಟ ಆಡಬೇಕು ಎಂದು ವರ ಕೇಳಿದ್ದರು. ಇತ್ತ ಮೀನಾಕ್ಷಿಗೆ ಆಶ್ಚರ್ಯ ದೇವಸ್ಥಾನಕ್ಕೆ ಬರುವ ಭಕ್ತರು ಏನೆಲ್ಲಾ ವರಗಳನ್ನ, ಬೇಡಿಕೆಗಳನ್ನ ಇಡುತ್ತಾರೆ. ನೀನು ಪಗಡೆ ಆಡಬೇಕೆ ಸರಿ ಎಂದಳು. ಶಂಕರರು ಅಮ್ಮ ನಿನಗೆ ಅರ್ಚಿಸಿರುವ ಅರಿಶಿನ- ಕುಂಕುಮದಿಂದ ಪಗಡೆ ಮನೆಗಳನ್ನು ರಚಿಸುತ್ತೇನೆ, ನಿನ್ನ ಪಾದದ ಕೆಳಗಿರುವ ಹೂವುಗಳನ್ನು ನನ್ನ ಕಾಯಿಗಳನ್ನಾಗಿ ಮಾಡಿಕೊಳ್ಳುತ್ತೇನೆ ನೀನು ನಿನ್ನ ಕಾಲoದಗೆಯಲ್ಲಿ ಹುದುಗಿಸಿರುವ ಮುತ್ತು, ಹವಳಗಳನ್ನು ಕಾಯಿಗಳನ್ನಾಗಿ ಮಾಡಿಕೋ ಎಂದರು. ಮೀನಾಕ್ಷಿ ಸರಿಯೆಂದಳು.
ಶಂಕರರು ಅಮ್ಮ ನನಗೆ ಸಂಖ್ಯಾಶಾಸ್ತ್ರ ಮತ್ತು ಅಕ್ಷರ ಶಾಸ್ತ್ರವು ತಿಳಿದಿದೆ, ನನಗೆ ನಿನಗೆ ಬೀಳುವ ಗರಳನ್ನು ಲೆಕ್ಕಾಚಾರ ಮಾಡಿ ಸಂಖ್ಯಾ ಶಾಸ್ತ್ರಕ್ಕೆ ಅನುಗುಣವಾಗಿ ರೇಖೆಗಳನ್ನು ರಚಿಸುತ್ತೇನೆ ಮತ್ತು ಅಕ್ಷರ ಶಾಸ್ತ್ರದಿಂದ ಬೀಜಾಕ್ಷರಗಳನ್ನು ರಚಿಸುತ್ತೇನೆ ಎಂದರು. ಮೀನಾಕ್ಷಿಯು ಸರಿ ಎಂದಳು. ಪಗಡೆಯ ಮನೆಗಳು, ಕಾಯಿ ಸಿದ್ಧವಾಯಿತು, ಅಮ್ಮ ದಾಳಗಳನ್ನು ನೀನೆ ಸೃಷ್ಟಿಸಿಕೊಡು ಎಂದರು. ತಾಯಿಯು ಸರಿ ತೆಗೆದುಕೊ ಎಂದಳು. ಶ್ರೀ ಶ್ರೀ ಶಂಕರರು ನಗುಮುಖದಲ್ಲಿ ಅಮ್ಮ ಎಂದರು ಮೀನಾಕ್ಷಿಯು ಇನ್ನು ಏನಯ್ಯ ಎಂದಳು, ಶಂಕರರು ಏನಿಲ್ಲಾ ಅಮ್ಮ ಗೆಲ್ಲು ಅಂತ ಆಶೀರ್ವಾದ ಮಾಡು ಎಂದರು ಅದಕ್ಕೆ ಮೀನಾಕ್ಷಿಯು ಅದು ಹೇಗೆ ಸಾಧ್ಯ ನನಗೆ ಸೋಲೇ ಇಲ್ಲ - "ವಿಜಯಾ ವಿಮಲಾ ವಂದ್ಯ..."ಎಂದು ನೀನೆ ನನ್ನನ್ನು ಪಠಿಸಿದೆಯಲ್ಲಾ. ಆದರೂ ಕೇಳಿದ್ದೀಯೇ ... ನಿನ್ನಿಂದ ರಚನೆಯಾದ ಗ್ರಂಥಗಳು, ಸ್ತೋತ್ರಗಳು, ಕೃತಿಗಳು ಅಜರಾಮರವಾಗಿ ಗೆಲ್ಲಲಿ ಎಂದು ಹರಸಿದಳು ಇಷ್ಟೆಲ್ಲಾ ಕೇಳಿದ್ದೀಯಾ ನನ್ನದು ಒಂದು ಷರತ್ತು ಇದೆ, ಮೀನಾಕ್ಷಿಯು ಶ್ರೀ ಶ್ರೀ ಶಂಕರರಿಗೆ ಹೇಳುವಳು. ಶಂಕರರು ಏನಮ್ಮ ಎಂದರು. ಏನನ್ನು ಪಣವಿಡದೆ ನಾನು ಆಟ ಆಡುವುದಿಲ್ಲ ಏನಾದರೂ ಪಣವಿಡಬೇಕು ಎಂದಳು. ಅದಕ್ಕೆ ಶ್ರೀ ಶ್ರೀ ಶಂಕರರು ಅಮ್ಮ ನೀನು ಸರ್ವಶಕ್ತಳು, ಮೂರು ಲೋಕಕ್ಕೂ ಒಡೆಯಳು, ರಾಜರಾಣಿಯರಿಗೂ ರಾಣಿಯಾದವಳು. ನಾನು ಸಂನ್ಯಾಸಿ ನನ್ನ ಬಳಿ ಏನೂ ಇಲ್ಲ. ಆದರೂ ಒಂದು ಪಣ ಇಡುತ್ತೇನೆ, ಅಮ್ಮ ನೀನು ಸೋತರೆ....... ಸೋಲುವ ಮಾತೇ ಇಲ್ಲಯ್ಯ ಎಂದಳು ಮೀನಾಕ್ಷಿ. ಶಂಕರರು ಹೇಳಿದರು ಅಕಸ್ಮಾತ್ ನೀನು ಸೋತರೆ ನರಬಲಿ, ಮಾಂಸಾನ್ನ ನೈವೇದ್ಯವನ್ನು ನೀನು ಸಂಪೂರ್ಣವಾಗಿ ನಿಲ್ಲಿಸಬೇಕು, ಅಕಸ್ಮಾತ್ ನಾನು ಸೋತರೆ ನಾನೇ ನಿನಗೆ ಈ ದಿನದ ಬಲಿಯಾಗುತ್ತೇನೆ ಎಂದರು. ಈ ಪಣ ಅಷ್ಟೇನೂ ಚೆನ್ನಾಗಿಲ್ಲ ಎಂದು ಮೀನಾಕ್ಷಿದೇವಿ ಆಟವನ್ನು ಪ್ರಾರಂಭಿಸಿದಳು ಮತ್ತೆ ಶಂಕರರು ಅಮ್ಮ ಎಂದರು ಏನುಯ್ಯ ಎಂದು ತಾಯಿ ಕೇಳಿದಳು ಅದಕ್ಕೆ ಆಚಾರ್ಯರು ನಿನ್ನ ಇಚ್ಛೆಯಂತೆ ಗರ ಬೀಳುವುದು ಸಹಜ ಹಾಗೆ ನನ್ನ ಇಚ್ಛೆಯಂತೆಯೂ ಗರ ಬೀಳುವಂತೆ ಆಶೀರ್ವದಿಸು ಎಂದರು. ಇನ್ನೇನು ಆಟ ಎಂದು ದೇವಿ ಕೇಳಿದಕ್ಕೆ, ಬಾಲ ಶಂಕರರು ಅಮ್ಮ ಗರ ಕೇಳಿದಷ್ಟು ಬೀಳಲಿ ಕಾಯಿಯನ್ನು ಬುದ್ಧಿವಂತಿಕೆಯಿಂದ ನಡೆಸಬೇಕಲ್ಲ ಎಂದರು, ಮೀನಾಕ್ಷಿ ಆಗಲಿ ಎಂದಳು.
ಆಟ ಮುಂದುವರೆದಂತೆ ಆಟದ ಮಧ್ಯೆ ಮಧ್ಯೆ ಬಿಂದುವಿನ ಮಧ್ಯದಲ್ಲಿರುವ ದೇವಿಯ ಸುತ್ತ ತ್ರಿಕೋನ, ವಸು ಕೋನ, ದಶಾರಯುಗ್ಮ ಹೀಗೆ ಆನೇಕ ಚಕ್ರಗಳನ್ನು ರಚಿಸಿದರು. ದೇವಿ ಏನಯ್ಯ ಎಂದು ಕೇಳಿದಳು. ಅಮ್ಮ ನಾನು ಕೇಳಿದ್ದೇನೇ ನೀನೂ ವರ ಕೊಟ್ಟಿದ್ದೀಯಾ ಹಾಗಾಗಿ ರಚಿಸುತ್ತಿದ್ದೇನೇ ತಪ್ಪಿದ್ದರೆ ಹೇಳು ಎಂದರು, ಸರಿ ಎಂದಳು. ಆಟ ಕೊನೆಯ ಹಂತಕ್ಕೆ ಬಂತು. ಮೀನಾಕ್ಷಿ ಗೆದ್ದೆ ಬಿಟ್ಟಳು ಶ್ರೀ ಶ್ರೀ ಶಂಕರರಿಗೂ ಒಂದೇ ಗರ ಬೇಕಿತ್ತು ಕೊನೆಯ ಕಾಯಿ ಹಣ್ಣು ಮಾಡುವುದಕ್ಕೆ, ಮೀನಾಕ್ಷಿ ಹೇಳಿದಳು ನಾನು ಗೆದ್ದೆ, ನೀನು ಸೋತೆ ಆಟ ಮುಗಿಯಿತು. ಪಣದ ಪ್ರಕಾರ ನಾನು ನಿನ್ನನ್ನು ಭಕ್ಷಿಸಬೇಕು ಎಂದಳು.
ಶಂಕರರು ಅಮ್ಮ ನಾನು ಗೆದ್ದಿದ್ದೇನೆ ಎಂದು ನನಗೆ ಗೋಚರವಾಗುತ್ತಿದೆ ಎಂದರು.ಇತ್ತ ಪಾಂಡ್ಯರಾಜ ಬಾಲವಟುವನ್ನು ಮೀನಾಕ್ಷಿಯ ಮಂದಿರಕ್ಕೆ ಕಳುಹಿಸಿಬಿಟ್ಟೆನಲ್ಲ ಎಂದು ಚಿಂತಿಸಿ ಏನಾದರು ಆಗಲಿ ಎಂದು ಅವನು ದೇವಾಲಯಕ್ಕೆ ಬಂದು ಶ್ರೀ ಶ್ರೀ ಶಂಕರರು ಹಾಗೂ ಮೀನಾಕ್ಷಿ ತಾಯಿಯು ವಾಕ್ ಸಂಧಾನವನ್ನು ಕಂಡು ದಿಗ್ರ್ಬಾಂತನಾಗಿ ನಿಂತಿದ್ದಾನೆ.
ಶ್ರೀ ದೇವಿಯು ಶಂಕರನಿಗೆ ಎಷ್ಟೋ ಬಾರಿ ನನಗೆ ಅಮ್ಮ.. ಅಮ್ಮ.. ಎಂದಿದ್ದೀಯಾ ಬದುಕಿಸುತ್ತೇನೆ ಹೋಗು ಎಂದು ಮೇಲೇಳಲು ಪ್ರಯತ್ನಿಸುತ್ತಿದ್ದಾಳೆ ಆಗುತ್ತಿಲ್ಲಾ ! ಸಾತ್ವಿಕ ಶ್ರೀ ಚಕ್ರದಲ್ಲಿ ಶ್ರೀ ದೇವಿಯ ನೆರಿಗೆಗಳೆಲ್ಲಾ ಸೇರಿ ಹೋಗಿವೆ. ಏನಯ್ಯ ಏನು ಮಾಡಿರುವೆ ಎಂದು ಕೇಳಿದಳು. ಆಗ ಶ್ರೀ ಶ್ರೀ ಶಂಕರರು ಅಮ್ಮ ನಿನ್ನ ಸುತ್ತ ನಿನ್ನ ಅನುಗ್ರಹದಿಂದಲೇ ಸಾತ್ವಿಕ ಶ್ರೀ ಚಕ್ರದ ರಚನೆ ಆಗಿದೆ. ನೀನೂ ಬಿಂದು ಮಂಡಲವಾಸಿನಿಯಾಗಿರುವೆ ಹಾಗಾಗಿ ನೀನು ಬಂದ ರೀತಿಯಲ್ಲೆ ತಿರುಗಿ ಹೋಗಲು ಸಾಧ್ಯವಿಲ್ಲ. ನೀನು ಕಾಳಿಯಾಗಿ ಬಂದೆ ಗೌರಿಯಾಗಿ ಹೋಗಬೇಕು ಈ ಸಾತ್ವಿಕ ಶ್ರೀ ಚಕ್ರಕ್ಕೆ ಬದ್ದಳಾಗಿ ಹೋಗಬೇಕು ಎಂದರು. ಅಷ್ಟರಲ್ಲಿ ನಾಲ್ಕನೇ ಜಾವದ ಕಹಳೆ ಮೊಳಗಿತ್ತು.ಮೀನಾಕ್ಷಿಯು ಶ್ರೀ ಸುಂದರೇಶ್ವರನನ್ನು ನೋಡಿದಳು.
ಶ್ರೀ ದೇವಿಯು ಶಂಕರನಿಗೆ ಎಷ್ಟೋ ಬಾರಿ ನನಗೆ ಅಮ್ಮ.. ಅಮ್ಮ.. ಎಂದಿದ್ದೀಯಾ ಬದುಕಿಸುತ್ತೇನೆ ಹೋಗು ಎಂದು ಮೇಲೇಳಲು ಪ್ರಯತ್ನಿಸುತ್ತಿದ್ದಾಳೆ ಆಗುತ್ತಿಲ್ಲಾ ! ಸಾತ್ವಿಕ ಶ್ರೀ ಚಕ್ರದಲ್ಲಿ ಶ್ರೀ ದೇವಿಯ ನೆರಿಗೆಗಳೆಲ್ಲಾ ಸೇರಿ ಹೋಗಿವೆ. ಏನಯ್ಯ ಏನು ಮಾಡಿರುವೆ ಎಂದು ಕೇಳಿದಳು. ಆಗ ಶ್ರೀ ಶ್ರೀ ಶಂಕರರು ಅಮ್ಮ ನಿನ್ನ ಸುತ್ತ ನಿನ್ನ ಅನುಗ್ರಹದಿಂದಲೇ ಸಾತ್ವಿಕ ಶ್ರೀ ಚಕ್ರದ ರಚನೆ ಆಗಿದೆ. ನೀನೂ ಬಿಂದು ಮಂಡಲವಾಸಿನಿಯಾಗಿರುವೆ ಹಾಗಾಗಿ ನೀನು ಬಂದ ರೀತಿಯಲ್ಲೆ ತಿರುಗಿ ಹೋಗಲು ಸಾಧ್ಯವಿಲ್ಲ. ನೀನು ಕಾಳಿಯಾಗಿ ಬಂದೆ ಗೌರಿಯಾಗಿ ಹೋಗಬೇಕು ಈ ಸಾತ್ವಿಕ ಶ್ರೀ ಚಕ್ರಕ್ಕೆ ಬದ್ದಳಾಗಿ ಹೋಗಬೇಕು ಎಂದರು. ಅಷ್ಟರಲ್ಲಿ ನಾಲ್ಕನೇ ಜಾವದ ಕಹಳೆ ಮೊಳಗಿತ್ತು.ಮೀನಾಕ್ಷಿಯು ಶ್ರೀ ಸುಂದರೇಶ್ವರನನ್ನು ನೋಡಿದಳು.
ಶ್ರೀ ಸುಂದರೇಶ್ವರರು ಪ್ರತ್ಯಕ್ಷವಾಗಿ, ಶಂಕರ ನನ್ನದೆ ಅಂಶಸಂಭೂತನಾಗಿ, ಬಾಲವಟುವಾಗಿ, ಕಾಮ ಪರಿತ್ಯಾಗಿಯಾಗಿ, ವಿರಾಗಿಯಾಗಿ ಭಂಡಾಸುರನ ವಧೆಯಿಂದ ಮುಂದುವರೆದ ಈ ನಿನ್ನ ನರಬಲಿಯನ್ನು ನಿಲ್ಲಿಸಲೆಂದೆ ಬಂದ ಕಾರಣಿಪುರುಷ ಎಂದರು. ಆಗ ತಾಯಿ ಮೀನಾಕ್ಷಿ ಶಂಕರರಿಗೆ ಮಾಂಸಾನ್ನ, ನರಬಲಿ, ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ಆಶ್ವಾಸನೆ ಇತ್ತಳು. ಬೆಳಗಿನ ಜಾವವಾಗಿತ್ತು ಶ್ರೀ ಸುಂದರೇಶ್ವರರು ಹಾಗೂ ಮೀನಾಕ್ಷಿಯು ಶ್ರೀ ಶಂಕರಾಚಾರ್ಯರಿಗೆ ಆಶೀರ್ವಾದಿಸಿ ತಮ್ಮ ಮೂರ್ತಿಯಲ್ಲಿ ಲೀನವಾದರು. ಶಂಕರರಿಂದ ಸ್ಥಾಪಿತವಾದ ಸಾತ್ವಿಕ ಶ್ರೀ ಚಕ್ರವು ಸ್ವರ್ಣರೇಖೆಯಿಂದ ಹೊಳೆಯುವಂತಿತ್ತು. ಪಾಂಡ್ಯ ರಾಜನಿಗೆ ಶ್ರೀ ಶಂಕರರು ಮೀನಾಕ್ಷಿ ದೇವಿ ಕುಳಿತಿದ್ದ ಸ್ಥಳದಲ್ಲಿ ಸ್ಥಾಪಿತವಾಗಿದ್ದ ಸಾತ್ವಿಕ ಶ್ರೀ ಚಕ್ರವನ್ನು ವಿವರಿಸಿ ಧ್ಯಾನ ಶ್ಲೋಕವನ್ನು ಪಠಿಸಿದರು.
ಬಿಂದು ತ್ರಿಕೋನ ವಸುಕೋನ ದಶರಾಯುಗ್ಮಾ |
ಮನ್ವoಸ್ತ್ರ ನಾಗದಳ ಷೋಡಶ ಪತ್ರ ಯುಕ್ತಮ್ ||
ವೃತ ತ್ರಯಂಚ ಧರಣಿ ಸಧನಂ ತ್ರಯಂಚ |
ಶ್ರೀಚಕ್ರ ರಾಜ ಉದಿತಃ ಪರದೇವತಾಯಹಾ ||
ಅದ್ವೈತ ಸಿದ್ದಾಂತದ ಸಾಧನವಾಗಿ ಮುಂದೆ ಎಲ್ಲಾ ದೇವಿಯರ ದೇವಾಲಯಗಳಲ್ಲಿ ಸಾತ್ವಿಕ ಶ್ರೀಚಕ್ರ ಸ್ಥಾಪನೆಯಾಯಿತು.
ಬಿಂದು ತ್ರಿಕೋನ ವಸುಕೋನ ದಶರಾಯುಗ್ಮಾ |
ಮನ್ವoಸ್ತ್ರ ನಾಗದಳ ಷೋಡಶ ಪತ್ರ ಯುಕ್ತಮ್ ||
ವೃತ ತ್ರಯಂಚ ಧರಣಿ ಸಧನಂ ತ್ರಯಂಚ |
ಶ್ರೀಚಕ್ರ ರಾಜ ಉದಿತಃ ಪರದೇವತಾಯಹಾ ||
ಅದ್ವೈತ ಸಿದ್ದಾಂತದ ಸಾಧನವಾಗಿ ಮುಂದೆ ಎಲ್ಲಾ ದೇವಿಯರ ದೇವಾಲಯಗಳಲ್ಲಿ ಸಾತ್ವಿಕ ಶ್ರೀಚಕ್ರ ಸ್ಥಾಪನೆಯಾಯಿತು.
ಸರ್ವೇ ಜನಾಃ ಸುಖಿನೋ ಭವಂತು|
ಸರ್ವೇ ಸಂತು ನಿರಾಮಯಾಃ|
ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿದ್ದುಃಖಭಾಗ್-ಭವೇತ್|
ಸರ್ವೇ ಸಂತು ನಿರಾಮಯಾಃ|
ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿದ್ದುಃಖಭಾಗ್-ಭವೇತ್|
ವಂದನೆಗಳು
ಪೃಥ್ವಿ ಎಂ ಎಲ್.
ಪೃಥ್ವಿ ಎಂ ಎಲ್.