Saturday, May 22, 2021

ಮಣ್ಣು

 ಎಣಿಸೇ ಇರಲಿಲ್ಲ ನಿನ್ನಿಂದ ಹಿಗ್ಗುವೆ ಎಂದು.,

ಎಲ್ಲ ಕಳೆದರು ಹೊಸ ಚೈತನ್ಯವ ತಂದು.,

ಯಾರಿಲ್ಲದಿದ್ದರೂ ನೀ ನನ್ನ ಕಡೆಗೆ ಬಂದು.,


ಯಾವ ಓದಿಗೂ ಸಿಗದ ಪುನರುಜ್ಜೀವನ ಇಂದು.,

ಮೊದಲ ಸರಿ ಸಾರ್ಥಕ ಎನಿಸಿದೆ ಮಣ್ಣೇ ನನ್ನ ಹೆಸರೆಂದು..,

ಊಹಿಸದಷ್ಟುಮೇರೆ ಮೀರುವ ಚಂದ ನಿಂದು.,

ತಿಳಿದು ಹೋಯಿತು ಕಡೆಗೆ ಕೈ ಹಿಡಿಯುವ ತಾಯಿ ನೀನೆಂದು...... 🙏❤💞


ಎಲ್ಲಾ ಒತ್ತಡಗಳನ್ನು ದೂರ ನೂಕಿ ಸಿದ್ದವಾದ ಸುಂದರ ಮಣ್ಣಿನ ಒಡವೆಗಳು..... ಹೇಳ ಸಿಗದಷ್ಟು ನೆಮ್ಮದಿ ಎನ್ನಿಸುತಿದೆ, ನನ್ನ ಗೆಳತಿ ಹೇಳಿದಳು ಮಣ್ಣು negetive energy ಹೀರಿ ನಮ್ಮ aura clean  ಮಾಡುತ್ತೆ ಅಂತ ನಿಜವೆನೋ ಗೊತಿಲ್ಲ, ಪ್ರಶಾಂತತೆ, ಬಣ್ಣಿಸಲಾಗದ ಸಂತೋಷವಂತು ಸಿಕ್ಕಿದೆ........ 😊

ಪೃಥ್ವಿ. ಎಂ. ಎಲ್.