ಎಣಿಸೇ ಇರಲಿಲ್ಲ ನಿನ್ನಿಂದ ಹಿಗ್ಗುವೆ ಎಂದು.,
ಎಲ್ಲ ಕಳೆದರು ಹೊಸ ಚೈತನ್ಯವ ತಂದು.,
ಯಾರಿಲ್ಲದಿದ್ದರೂ ನೀ ನನ್ನ ಕಡೆಗೆ ಬಂದು.,
![]() |
ಯಾವ ಓದಿಗೂ ಸಿಗದ ಪುನರುಜ್ಜೀವನ ಇಂದು.,
ಮೊದಲ ಸರಿ ಸಾರ್ಥಕ ಎನಿಸಿದೆ ಮಣ್ಣೇ ನನ್ನ ಹೆಸರೆಂದು..,
ಊಹಿಸದಷ್ಟುಮೇರೆ ಮೀರುವ ಚಂದ ನಿಂದು.,
ತಿಳಿದು ಹೋಯಿತು ಕಡೆಗೆ ಕೈ ಹಿಡಿಯುವ ತಾಯಿ ನೀನೆಂದು...... 🙏❤💞
ಎಲ್ಲಾ ಒತ್ತಡಗಳನ್ನು ದೂರ ನೂಕಿ ಸಿದ್ದವಾದ ಸುಂದರ ಮಣ್ಣಿನ ಒಡವೆಗಳು..... ಹೇಳ ಸಿಗದಷ್ಟು ನೆಮ್ಮದಿ ಎನ್ನಿಸುತಿದೆ, ನನ್ನ ಗೆಳತಿ ಹೇಳಿದಳು ಮಣ್ಣು negetive energy ಹೀರಿ ನಮ್ಮ aura clean ಮಾಡುತ್ತೆ ಅಂತ ನಿಜವೆನೋ ಗೊತಿಲ್ಲ, ಪ್ರಶಾಂತತೆ, ಬಣ್ಣಿಸಲಾಗದ ಸಂತೋಷವಂತು ಸಿಕ್ಕಿದೆ........ 😊
ಪೃಥ್ವಿ. ಎಂ. ಎಲ್.