Thursday, December 15, 2022

ಸಂಕಲ್ಪ ಸುಧೆ

 


      ಅಲೌಕಿಕ ಶಕ್ತಿಯ ಪವಿತ್ರ ಜೀವನವನ್ನ ಹಿಡಿ ಹಿಡಿಯಾಗಿ 30 ಅಧ್ಯಾಯಗಳ ಮೂಲಕ ಸವಿಸ್ತಾರವಾಗಿ ತಿಳಿಯಬಹುದಾದ 750 ಪುಟಗಳುಳ್ಳ ಅದ್ಭುತ ಗ್ರಂಥ, "ಶ್ರೀ ಶಾರದಾದೇವಿ ಜೀವನಗಂಗಾ". ಪುರುಷೋತ್ತಮಾನಂದ ಜೀ ಮಹಾರಾಜ್ ಅವರ ಸುಪ್ರಸಿದ್ದ ಕೃತಿ ಶ್ರೇಣಿಗಳಲ್ಲಿ ಒಂದು. ಪುಸ್ತಕದ ಕೊನೆ ಅಧ್ಯಾಯವನ್ನ ಈಗಷ್ಟೇ ಓದಿ ಮುಗಿಸಿದ್ದೇನೆ.. ಸಂಪೂರ್ಣ ಶೂನ್ಯತೆ ತುಂಬಿದಂತಿದೆ, ಆದರೆ ಈ ಶೂನ್ಯತೆಯಲ್ಲೇ ಸಂಪೂರ್ಣ ಜ್ಞಾನದ ದೀವಿಗೆಯ ಬೆಳಕೂ ಕಂಡಂತಿದೆ.

  ಇಡೀ ಪುಸ್ತಕದಲ್ಲಿ ಪ್ರತಿ ಸನ್ನಿವೇಶಗಳೂ ಮನಸ್ಸಿಗೆ ನಾಟುತ್ತದೆ ಆದರೂ ಶ್ರೀಮಾತೆಯವರು ದುರ್ಗಾ ಪೂಜೆಯ ದಿನ ತನ್ನೆಲ್ಲಾ ಪ್ರೀತಿಯ ಮಕ್ಕಳ ಪರವಾಗಿ.. ಅಂದರೆ ತಮಗೆ ತಿಳಿದಿರುವ, ತಿಳಿಯದಿರುವ-ಮುಂಬರುವ ಎಲ್ಲಾ ಮಕ್ಕಳ ಪರವಾಗಿ ಅದಾಗಲೇ ಪುಷ್ಪಾಂಜಲಿಯನ್ನು ಬಹಳ ಗಂಭೀರ ಭಾವದಿಂದ ಸ್ವೀಕರಿಸಿದ್ದು, ಆಶೀರ್ವದಿಸಿದ್ದು ನಾವು ಭಾವಿಸಿದಷ್ಟು ಖುಷಿ ಎನ್ನಿಸುತ್ತದೆ..

  ಇನ್ನೇನೂ ವಿವರಿಸುವ ಶಕ್ತಿ ಇಲ್ಲವೆಂಬ ಭಾವ.. ಈ ಜಗನ್ಮಾತೆಯ ಮಾಯಾ ಲೀಲೆ ಓದಿದಷ್ಟು, ನೋಡಿದಷ್ಟು, ಭಾವಿಸಿದಷ್ಟು ವಿಸ್ತಾರ, ನಿರಾಡಂಭರ..

   ಈ ಸಂಕಲ್ಪ ವ್ರತವನ್ನು ಹಮ್ಮಿಕೊಟ್ಟು, ಪುಸ್ತಕವನ್ನು ಇತ್ತ ಮಾತಾ ಚೈತನ್ಯಮಯೀ. ಅಧ್ಯಕ್ಷರು, ಶ್ರೀ ಶಾರದಾಶ್ರಮ, ಹಿರಿಯೂರು. ಇವರಿಗೆ ಮನಃ ಪೂರ್ವಕವಾಗಿ ನಮಸ್ಕರಿಸುತ್ತೇನೆ.

ಎಲ್ಲರನ್ನು ಪ್ರೀತಿಸೋಣ, ದೋಷಗಳನ್ನ ನಿರ್ಲಕ್ಷಿಸೋಣ, ಜಗತ್ತೇ ನಮ್ಮದು..

ಸರ್ವರಿಗೂ ಶ್ರೀ ಮಾತೆಯವರ 170ನೇ ಜಯಂತಿಯ ಶುಭಾಶಯಗಳು.

ಜೈ ರಾಮಕೃಷ್ಣ..ಜೈ ಮಾ.. 🙏

ಡಾ. ಪೃಥ್ವಿ. ಎಂ. ಎಲ್.

Sunday, December 11, 2022

BLAST ANALYSIS

 Namaste.

Here i am uploading the information about BLAST Analysis. Hope make use of it. If any error found plz let me know.

Regards

Dr. Pruthvi M L.