ನಮ್ಮಲ್ಲಿ ಎಷ್ಟೋ ಜನಕ್ಕೆ ಪದೇ ಪದೇ ಅನ್ನಿಸೋ ಭಾವನೆ ಅಂದರೆ ಈ ಕಷ್ಟಗಳೇ ಜೀವನವೇ? ಎಂದು.. ಆದರೆ ಕಣ್ಣುಗಳನ್ನು ತೆರೆದು ನೋಡಿದರೆ ತಿಳಿಯುತ್ತೆ ಯಾರ ಜೀವನದಲ್ಲೂ ಕಷ್ಟಗಳೇ ಇಲ್ಲ, ಇರುವುದು ಉತ್ತರವಿರುವ ಸವಾಲುಗಳು ಮಾತ್ರ ಅಂತ. ನಾವು solutions/ಉತ್ತರಗಳನ್ನು ಹುಡುಕುವಷ್ಟು ಶಕ್ತಿಶಾಲಿಗಳಾಗಿರಬೇಕು ಅಷ್ಟೇ. ಬಹು ಬೇಗ ಬೇಸರ, ನಿರುತ್ಸಾಹ, ದುಃಖ, ಚಿಂತನೆಗಳಿಲ್ಲದ ಚಿಂತೆ. So called depression ಮೈ-ಮನಸ್ಸುಗಳನ್ನ ತುಂಬಿ ಬಿಡತ್ತೆ. ಇದರ ಆಚೆ ಸ್ವಲ್ಪ ನಾವು ಯೋಚಿಸಿದರೆ, ಈ ನಮ್ಮ ಭರತ ಭೂಮಿಯಲ್ಲಿ ಈ ದಿನವು ಕೂಡ ಪೂಜ್ಯನೀಯರಾದ, ಮರ್ಯಾದ ಪುರುಷ ಶ್ರೀ ರಾಮಚಂದ್ರರಿಗೆ ಕಷ್ಟಗಳು ಇರಲಿಲ್ಲವೇ? ಲೌಕಿಕ ಸೂಕ್ಷ್ಮದಿಂದ ನೋಡಿ ಹೋಲಿಸಿದರೆ ರಾವಣನಿಗಿಂತ ಒಂದರ ಮೇಲೊಂದು ಕಷ್ಟಗಳನ್ನ ಕಂಡಿದ್ದು ಶ್ರೀರಾಮನೇ.. ಸಾಕ್ಷಾತ್ ಭಗವಂತನಾದ ಶ್ರೀ ಕೃಷ್ಣನಿಗೆ ಕಷ್ಟಗಳು ಬರಲಿಲ್ಲವೇ? ಅಸುಗೂಸು ಹೆತ್ತ ತಾಯಿ ಇಂದ ದೊರವಾಗಿ ಬೆಳೆಯಬೇಕಾಯಿತಲ್ಲ, ಇದಕ್ಕಿಂತ ದೊಡ್ಡ ವಿಧಿ ಉಂಟೆ? ಇನ್ನು ಶ್ರೀ ರಾಮಕೃಷ್ಣ ಪರಮಹಂಸರನ್ನೇ ಈ ಸಮಾಜ ಹುಚ್ಚ ಎಂದ ವಿಚಿತ್ರ ದುರ್ದೈವವನ್ನು ನಾವು ಓದಿದ್ದೇವೆ, ಶ್ರೀ ಮಾತೆ ಅವರದ್ದು ಸಂಪೂರ್ಣವಾದ ಯಾವ ಲೌಕಿಕ ಸುಖವನ್ನು ಕಾಣದ, ಬಯಸದ ತ್ಯಾಗಮಯಿ ಜೀವನ.. ಕೊನೆಯದಾಗಿ ಪ್ರಪಂಚದಲ್ಲೇ ಮೊಟ್ಟ ಮೊದಲು ಸಂನ್ಯಾಸತ್ವದಲ್ಲಿ ಸಾಕ್ಷಾತ್ಕಾರವನ್ನಷ್ಟೇ ಕಾಣದೆ, ಮೋಕ್ಷವನ್ನೇ ಗುರಿಯಾಗಿಸಿಕೊಳ್ಳದೆ, ಇಡೀ ದೇಶವನ್ನೇ ಮೇಲೆತ್ತುವ, ವೀರ ಸಂನ್ಯಾಸಿ ಎನಿಸಿದ ಸ್ವಾಮಿ ವಿವೇಕಾನಂದರು ಪಟ್ಟಿರುವ ಕಷ್ಟಗಳು ಕಡಿಮೆ ಏನಲ್ಲ, ತನ್ನ ಸಂಗಡದ ಸಂನ್ಯಾಸಿಗಳ ಜೊತೆ ಎಷ್ಟೋ ದಿನ ಊಟವು ಇಲ್ಲದೆ, ನಾನಾಕಾರಣಗಳಿಂದ ಆದ ಅದೆಷ್ಟೋ ದೇಹಬಾದೆಯನ್ನು ಮೀರಿ ಆತ್ಮಶಕ್ತಿಯನ್ನೇ ಮಹಾಶಕ್ತಿಯಾಗಿ ತೋರಿಸಿದ ಉದಾಹರಣೆಗಳು ನಮ್ಮೆದುರಿಗೆ ಇವೆ.. ಸದ್ಗುರು ಸಾಯಿಬಾಬ, ಮಹಾತ್ಮ ಗಾಂಧೀಜಿ, ನೆಲ್ಸನ್ ಮಂಡೇಲಾ, ಅಬ್ದುಲ್ ಕಲಾಂ.. ಹೀಗೆ ಅದೆಷ್ಟೋ ದೈವಿಕ ಸಾತ್ವಿಕರು, ಇವರೆಲ್ಲರನ್ನು ನಾವು ಮರೆಯುವಂತಿಲ್ಲ, ಇಂದಿಗೂ ಎಂದಿಗೂ ಅಜರಾಮರವಾಗಿರುವ ಇವರು ದೈವದತ್ತರು ಎಂಬುದು ಸತ್ಯ..
ಹೀಗಿರುವಾಗ ನಾವು ನಮ್ಮ ಜೀವನ,ಅದರ ಸ್ಥಿತಿಯನ್ನು ಯಾಕೆ ಯಾವಾಗಲೂ ಯಾರೋ ಬಾಹ್ಯವಾಗಿ ಚೆನ್ನಾಗಿ ಕಾಣುವವರೊಂದಿಗೆ ಹೋಲಿಸಿಕೊಳ್ಳುತ್ತೇವೆ.? ದೇವರನ್ನೇ ಶಪಿಸುತ್ತೇವೆ, ಆದರೆ ಬಹಳಷ್ಟು ಕಷ್ಟಗಳು ಬಂದಿರುವುದು, ಬರುವುದು ದೈವೀಭೂತರಿಗೆ ಹೊರತು ಸಾಮಾನ್ಯ ನರರಿಗಲ್ಲ. ಕಷ್ಟಗಳು, ಸಮಸ್ಯೆಗಳು ಬರುವುದು ಎದುರಿಸುವ ಶಕ್ತಿ ಇರುವವರಿಗೆ, ದೈವದ ಕೃಪೆಯಿರುವರಿಗೆ, ಶ್ರೇಷ್ಠವಂತರಿಗೆ. ಆದರಿಂದ ಇದು ನಮ್ಮ ಕರ್ಮ, ದುರದೃಷ್ಟ ಅಂತ ಅಂದುಕೊಳ್ಳುವುದೇ ವ್ಯರ್ಥ. ಸಾಮರ್ಥ್ಯ ಇರುವುದಕ್ಕೆ ಸಮಸ್ಯೆ, ಹೆಮ್ಮೆಯ ವಿಷಯ ಅಲ್ಲವೇ? ನಾನು ಬಹಳ ಸಂತೋಷದಿಂದ ಹೇಳುತ್ತೇನೆ, ಯುವ ಸಮೂಹ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅರಿವಿನ ಹರಿವು ಕಂಡುಕೊಂಡಿರುವವರು ಹೇಳುವ ಮಂತ್ರ - "ದೀನ ದೇವೋಭವ , ದರಿದ್ರ ದೇವೋಭವ , ರೋಗಿ ದೇವೋಭವ , ಪಾಪಿ ದೇವೋಭವ ..."
ಈ ಲೇಖನವನ್ನು ಬರೆಯುವ ಮನಸ್ಸಾಗಿದರ ಉದ್ದೇಶ ಎಷ್ಟೋ ಮನೆಗಳಲ್ಲಿ ಮನಗಳಲ್ಲಿ ಲಾಸ್ಯತೆ ಮರೆಯಾಗಿ ಆಲಸ್ಯಗಳು, ಗೊಂದಲಗಳು, ಮನಸ್ತಾಪಗಳು ಹೆಚ್ಚುತಿವೆ. ಈ ವಾತಾವರಣದಲ್ಲಿ ಮನೆಯಲ್ಲಿ ಎಲ್ಲರೊಂದಿಗೆ ಇರುವ ಅನಿವಾರ್ಯತೆ ಕೆಲವರಿಗೆ.. ಸರ್ವೇ ಸಾಮಾನ್ಯವಾಗಿ ಬೇಸರಗಳು ಇರುವಾಗ ಒಂದು ಸುತ್ತು ಹೊರಗೆ ಹೋಗಿಬಂದರೆ ಕಮ್ಮಿ ಆಗುವ ಜಾಯಮಾನ ನಮ್ಮಲ್ಲಿ ಬಹಳಷ್ಟು ಮಂದಿಗೆ. ಆದರೆ ಅದು ಸಮಸ್ಯೆಗೆ ಯಾವತ್ತೂ ಶಾಶ್ವತವಾದ ಪರಿಹಾರ ಆಗಿರುವುದಿಲ್ಲ. ನಮ್ಮ ಸಂಸ್ಕಾರ ಒಟ್ಟಿಗೆ ಇದ್ದು ಎದುರಿಸುವುದೇ ಹೊರತು ದಿಕ್ಕಾಪಾಲಾಗುವುದಲ್ಲ.
ಆತ್ಮೀಯರೇ ಅವರವರ ಪರಿಸ್ಥಿತಿಗಳು ಅವರವರಿಗೆ ತಿಳಿದಿರುತ್ತದೆಯೇ ಹೊರತು ಬೇರೆಯವರಿಗಲ್ಲ.. ಅದೇನೇ ಇರಲಿ
ನನ್ನದೆಂಬುದೇನಿಲ್ಲ,
ಇರುವುದು ನಿನ್ನದೆ ಎಲ್ಲ |
ನಿನ್ನದು ನಿನಗೆ ಅರ್ಪಿಸುತಲಿ,
ನೆಮ್ಮದಿಯಿಂದಿರುವೆ- ಕಬೀರಾ |
ನೆಮ್ಮದಿಯಿಂದಿರುವೆ...
ಎಂದು ನಮ್ಮೆಲ್ಲಾ ಭಾವನೆಗಳು, ನೋವು - ನಲಿವುಗಳನ್ನ, ಅಸಮಾಧಾನಗಳನ್ನ ಕಾಣದ ಶಕ್ತಿಗೆ ಅರ್ಪಿಸಿ ನೆಮ್ಮದಿಯಿಂದ, ತೃಪ್ತಿಯಿಂದ, ಶಾಂತಿಯಿಂದ ಬದುಕೂಣ...Stay home stay safe...
ಇಂತಿ
ಪೃಥ್ವಿ ಎಂ ಎಲ್.
ತುಂಬಾ ಚೆನ್ನಾಗಿದೆ, ಇನ್ನೂ ಹೆಚ್ಚು ಹಚ್ಚು ಬರವಣಿಗೆ ನಿಮ್ಮಿಂದ ನೀರೀಕ್ಷಿಸುತ್ತೇವೆ.
ReplyDeleteWe found a best teacher in our MSc on u, in projects we came to know a best research qualities in u. But now I'm amazing mam. Very nice article for present situation. Proud to be a student of you man.. ��
ReplyDeleteಕಷ್ಟಗಳು ಮನುಷ್ಯನಿಗೆ ಅಲ್ಲದೆ ಮರಕ್ಕೆ ಬರುತ್ತದೆಯೇ- ಎಂಬ ಮಾತಿಗೆ ಓರೆ ಹಚ್ಚುವ ಲೇಖನ.... 🙏
ReplyDeleteತುಂಬಾ ಚೆನ್ನಾಗಿದೆ ಮೇಡಂ
ReplyDeleteವೈಚಾರಿಕತೆ, ಪ್ರಬುದ್ಧತೆ ನಿಮ್ಮ ಲೇಖನದಲ್ಲಿ ಕಾಣುತ್ತಿದೆ.. ಎಲ್ಲರನ್ನೂ ಸಲಹುವನು.. .Best wishes Madam
ReplyDeleteExcellent article ������
ReplyDeleteCultivation of positivity, superb mam..
ReplyDeleteNice pruthvi
ReplyDeleteLife nourishes by self motivation, motivation comes by the stories like this.
ReplyDeleteGood positive motivational article during Lock down.
ReplyDeleteGood positive motivational article during Lock down.
ReplyDeleteಸಂದರ್ಭಕ್ಕೆ ಸರಿಯಾದ ಲೇಖನ ಅಕ್ಕ
ReplyDeleteVery nice article
ReplyDeleteVery nice article
ReplyDeleteNicely narrated good job
ReplyDeleteVery nice article Pruthvi it perfectly suitable for present situation
ReplyDeleteVery nice article and it suitable for present situation
ReplyDeleteSuper
DeleteDrparveen super
DeleteTumba chenagide Mam....
ReplyDeleteTumba chenagide Mam....
ReplyDeleteNice reminder that an individual’s perspective is a conscious personal and powerful choice!
ReplyDeleteVia Mamata from America
From VINAY Nice and very interesting Story 😊
ReplyDeleteThank you very much for valuable comments.
ReplyDeleteಕಷ್ಟಗಳಿಲ್ಲದ ಬದುಕು, ಬದುಕೇ ಅಲ್ಲ. ನಮ್ಮ ಜೀವನದಲ್ಲಿ ಕಷ್ಟದ ದಿನಗಳು ಬಂದಾಗಲೇ ನಮ್ಮಲ್ಲಿನ ಸಾಮರ್ಥ್ಯ ನಮಗೆ ತಿಳಿಯೋದು. ಒಳ್ಳೆಯ ಲೇಖನ ಅಕ್ಕ. 🙏
ReplyDeleteಈ ಲೇಖನದಲ್ಲಿ ಇನ್ನೊಂದು ಸೇರಿಸಿಕೊಳ್ಳೋದಾದ್ರೆ, ಅಂತಹ ಶಕ್ತಿಶಾಲಿ ಹನುಮಂತನಿಗೂ ಸಹಾ ಲಕ್ಷ್ಮಣನಿಗೆ ಕಷ್ಟ ಎದುರಾದಾಗಲೇ, ಅವನ ಸಾಮರ್ಥ್ಯ ಅರ್ಥವಾಗಿ, ಲಂಕೆಯಿಂದ - ಹಿಮಾಲಯಕ್ಕೆ ಹಾರಿ, ಸಂಜೀವಿನಿ ಬೆಟ್ಟವನ್ನೇ ಹೊತ್ತು ತಂದದ್ದು.