ನಮ್ಮ ಪೂಜಾನುಷ್ಠನಗಳಲ್ಲಿ, ಆಚರಣೆಗಳಲ್ಲಿ ಶ್ರೀ ಚಕ್ರವು ಅತ್ಯಂತ ಶಕ್ತಿಯುತವಾದದ್ದು ಹಾಗೂ ಪ್ರಾಧಾನ್ಯವಾಗಿರುವ ಪೂಜ್ಯನೀಯ, ಪರಮ ಪವಿತ್ರ ಶ್ರೀ ದೇವಿಯ ಪ್ರತಿರೂಪವಾಗಿದೆ. ಇಂತಹ ಶ್ರೀಚಕ್ರದ ಉಗಮ ಆದುದ್ದಾದರು ಹೇಗೆ ಎಂದು ಯೋಚಿಸಿದರೆ ನಮಗೆ ಸವಿಸ್ತಾರವಾದ ಅನೇಕ ಉಪಕಥೆಗಳನ್ನು ಹೊಂದಿರುವ ಪುಣ್ಯಪ್ರದವಾದ ಕಥೆಯು ದೊರೆಯುತ್ತದೆ. ಈ ಪೌರಾಣಿಕ ಶ್ರೇಷ್ಠ ಕಥೆಯಲ್ಲಿ ಶ್ರೀ ಚಕ್ರದ ಉಗಮದ ಕುರಿತು ಒಂದು ಸಣ್ಣ ಲೇಖನವನ್ನು ದೈವಾಸಕ್ತರಿಗಾಗಿ ಪ್ರಸ್ತುತಪಡಿಸುತ್ತಿದ್ದೆನೆ.
ನಾನು ಮೊದಲೇ ಹೇಳಿದಂತೆ ಇದು ಸುವಿಸ್ಥಾರವಾದ ವ್ಯಾಖ್ಯಾನ, ಲಲಿತೋಪಾಖ್ಯಾನದಲ್ಲಿ ಪ್ರಕಟವಾಗಿದೆ. ಸಾಧ್ಯವಾದಷ್ಟೂ ಮಟ್ಟಿಗೆ ಸರಳವಾಗಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದೇನೆ.
ಸತಿ ದೇವಿಯು ದೂರವಾದ ನಂತರ ಶಿವನು ಭೈರಾಗಿಯಾಗಿ ತಪೋಮಗ್ನನಾಗಿರುವ ಸಮಯ, ಇತ್ತ ಪಾರ್ವತಿಯು ಶಿವನನ್ನೇ ವರಿಸಬೇಕೆಂದು ಇಚ್ಛಿಸಿ ಕೈಲಾಸದಲ್ಲಿ ಶಿವನ ಮುಂದೆ ಶಿವನನ್ನೇ ಧ್ಯಾನಿಸಿ ಕುಳಿತಿದ್ದಾಳೆ. ದೇವತೆಗಳು ಪಾರ್ವತಿಯ ಇಚ್ಛೆಯನ್ನು ಪೂರೈಸುವುದಕ್ಕಾಗಿ ರತಿ-ಮನ್ಮಥರಲ್ಲಿ ವಿನಂತಿಸಿ ಶಿವನ ತಪೋಭಂಗ ಪಡಿಸಿದ್ದಾಗಿತ್ತು. ಕೈಲಾಸದಲ್ಲಿ ಮುಕ್ಕಣ್ಣನ ಮೂರನೇ ಕಣ್ಣಿಗೆ ಮನ್ಮಥ ಸುಟ್ಟು ಭಸ್ಮವಾದಗ ಅಲ್ಲಿಯೆ ಇದ್ದ ಚಿತ್ರಕರ್ಮ ಎಂಬ ಗಂಧರ್ವನು ಆ ಬೂದಿಯಲ್ಲಿ ಒಂದು ಸುಂದರವಾದ ಗೊಂಬೆಯನ್ನು ತಯಾರಿಸಿದ. ಎಷ್ಟೋ ಕಾಲಘಟ್ಟವಾದ ನಂತರ ಆ ಗೊಂಬೆಯನ್ನು ನೋಡಿದ ಪರಶಿವ ಮನಸ್ಸಿನಲ್ಲಿ ಎಷ್ಟು ಚೆನ್ನಾಗಿದೆ ಎಂದು ದಿಟ್ಟಿಸಿ ನೋಡಿದ, ಈಶ್ವರನ ಕೃಪಾಕಟಾಕ್ಷದಿಂದ ಆ ಗೊಂಬೆಗೆ ಜೀವ ಬಂದು, ಚಿತ್ರಕರ್ಮ ಶತರುದ್ರಿ ಮಂತ್ರವನ್ನು ಉಪದೇಶಿಸಿದ್ದರು. ನಿರಂತರ ಶತರುದ್ರಿ ಮಂತ್ರದ ಜಪದಿಂದ ಭೋಲೇನಾಥನ ಅನುಗ್ರಹವಾಗಿ ವರವು ಸಿಕ್ಕಿತು. ಇದನ್ನು ಸತ್ಯಲೋಕದಿಂದ ನೋಡುತ್ತಿದ್ದ ಬ್ರಹ್ಮ ದೇವರು ಸಂತೋಷದಿಂದ ಭಂಡ್ ಭಂಡ್ ಎಂದು ಗರ್ಜಿಸಿದ್ದರು, ಈ ಜೀವವಿರುವ ಗೊಂಬೆಗೆ ನಾಮಕರಣವಾಯಿತು "ಭಂಡಾಸುರ" ಎಂದು.
ಪರಮೇಶ್ವರನ ವರ, ಬ್ರಹ್ಮನ ಅನುಗ್ರಹ ಎರಡು ಸಿಕ್ಕ ಭಂಡಾಸುರನ ದುರಹಂಕಾರ ಎಲ್ಲೆ ಮೀರಿತ್ತು. ದೇವೇಂದ್ರನಿಗೆ ಉಪಟಳ ಶುರುವಾಯಿತು. ದೇವತೆಗಳು ಬೃಹಸ್ಪತಿ ಆಚಾರ್ಯರ ಸಲಹೆಯ ಮೇರೆಗೆ ಕಾಮೇಶ್ವರಿಯಾದ ಶ್ರೀ
ಲಲಿತೆಯನ್ನು ಪ್ರಾರ್ಥಿಸಲು ಸುಮೇರು ಪರ್ವತದ ತಪ್ಪಲಿನಲ್ಲಿ ಯಜ್ಞವನ್ನು ಆರಂಬಿಸಿದರು, ಯಜ್ಞದ ಅಂತ್ಯಕಾಲಕ್ಕೆ ಸರಿಯಾಗಿ ಅತ್ಯಂತ ದೈವಿಭೂತಳು, ಸರ್ವಶಕ್ತಳೂ, ಸ್ಪುರದ್ರೂಪಳು ಆದ ಶ್ರೀ ಲಲಿತತ್ರಿಪುರಸುಂದರಿ ದೇವಿಯು ಪ್ರಕಾಶಮಾನವಾಗಿ ಯಜ್ಞಕುಂಡದಿಂದ ಉದ್ಭವಿಸಿದಳು.
ಚಿದಾಗ್ನಿ ಕುಂಡ ಸಂಭೂತೆಯಾಗಿ, ದೇವತೆಗಳ ಕಾರ್ಯಕ್ಕಾಗಿ ( ದೇವಕಾರ್ಯ ಸಮುದ್ಯತಾ) ಅಂದರೆ ಭಂಡಾಸುರನ ವಿನಾಶಕ್ಕಾಗಿ ಜನ್ಮ ತಳೆದಳು. ಆಕೆಯ ಬಲಗಾಲಿನ ಹೆಬ್ಬೆರಳು ಒಂದು ಬಿಂದುವಿನ ಮೇಲೆ ಇತ್ತು, ಆ ಬಿಂದುವಿನ ಸುತ್ತಲೂ ಶಕ್ತಿಯುತ ಮಂತ್ರ ಉಚ್ಚಾರದಿಂದ ಚಕ್ರವು ಸೃಷ್ಟಿಯಯಿತು. ಈ ಚಕ್ರವೇ ಆ ದೇವಿಗೆ ಆವಾಸವಾಗಿ, ಒಂದು ರೀತಿಯ ರಥದಂತೆ ಕಾಣುತ್ತಿತ್ತು. ಅತ್ಯಂತ ಶಕ್ತಿಯ ಘೋರಾಕ್ಷರದಿಂದ, ಘೋರವರ್ಣಗಳಿಂದ ಕೂಡಿತ್ತು. ಹೀಗೆ ಮೂಲ ಶ್ರೀಚಕ್ರದ ಉದ್ಭವವಾಗಿರುತ್ತದೆ.
ಶ್ರೀ ಲಲಿತೆಯು ಚಿಂತಾಮಣಿ ಎಂಬ ಗೃಹದಲ್ಲಿ ಕಾಮರಾಜ ಪೀಠದ ಮೇಲೆ ಅಂದರೆ ಬ್ರಹ್ಮ, ವಿಷ್ಣು, ಈಶ್ವರ, ಇಂದ್ರ ಎಂಬ ನಾಲ್ಕು ಕಾಲ್ಗಳುಳ್ಳ ಮಹಾದೇವನೇ ಆಸನವಾಗಿರುವ ಪೀಠದ ಮೇಲೆ ಕಾಮೇಶ್ವರನ ಎಡತೊಡೆಯ ಮೇಲೆ ವರ್ಣಿಸಲಾಗದ ಸೌಂದರ್ಯದ ರಾಶಿಯಾಗಿ ಶ್ರೀ ಕಾಮೇಶ್ವರಿಯು ಕುಳಿತಿರುತ್ತಾಳೆ ಎಂಬುದು ಪ್ರತೀತಿ.
ಚಿದಾಗ್ನಿ ಕುಂಡ ಸಂಭೂತೆಯಾಗಿ, ದೇವತೆಗಳ ಕಾರ್ಯಕ್ಕಾಗಿ ( ದೇವಕಾರ್ಯ ಸಮುದ್ಯತಾ) ಅಂದರೆ ಭಂಡಾಸುರನ ವಿನಾಶಕ್ಕಾಗಿ ಜನ್ಮ ತಳೆದಳು. ಆಕೆಯ ಬಲಗಾಲಿನ ಹೆಬ್ಬೆರಳು ಒಂದು ಬಿಂದುವಿನ ಮೇಲೆ ಇತ್ತು, ಆ ಬಿಂದುವಿನ ಸುತ್ತಲೂ ಶಕ್ತಿಯುತ ಮಂತ್ರ ಉಚ್ಚಾರದಿಂದ ಚಕ್ರವು ಸೃಷ್ಟಿಯಯಿತು. ಈ ಚಕ್ರವೇ ಆ ದೇವಿಗೆ ಆವಾಸವಾಗಿ, ಒಂದು ರೀತಿಯ ರಥದಂತೆ ಕಾಣುತ್ತಿತ್ತು. ಅತ್ಯಂತ ಶಕ್ತಿಯ ಘೋರಾಕ್ಷರದಿಂದ, ಘೋರವರ್ಣಗಳಿಂದ ಕೂಡಿತ್ತು. ಹೀಗೆ ಮೂಲ ಶ್ರೀಚಕ್ರದ ಉದ್ಭವವಾಗಿರುತ್ತದೆ.
ಶ್ರೀ ಲಲಿತೆಯು ಚಿಂತಾಮಣಿ ಎಂಬ ಗೃಹದಲ್ಲಿ ಕಾಮರಾಜ ಪೀಠದ ಮೇಲೆ ಅಂದರೆ ಬ್ರಹ್ಮ, ವಿಷ್ಣು, ಈಶ್ವರ, ಇಂದ್ರ ಎಂಬ ನಾಲ್ಕು ಕಾಲ್ಗಳುಳ್ಳ ಮಹಾದೇವನೇ ಆಸನವಾಗಿರುವ ಪೀಠದ ಮೇಲೆ ಕಾಮೇಶ್ವರನ ಎಡತೊಡೆಯ ಮೇಲೆ ವರ್ಣಿಸಲಾಗದ ಸೌಂದರ್ಯದ ರಾಶಿಯಾಗಿ ಶ್ರೀ ಕಾಮೇಶ್ವರಿಯು ಕುಳಿತಿರುತ್ತಾಳೆ ಎಂಬುದು ಪ್ರತೀತಿ.
ಇದು ಮೂಲ ಶ್ರೀ ಚಕ್ರದ ಉಗಮದ ಕಥೆ. ಆದರೆ ಇಂದು ನಾವು ಪೂಜಿಸುತ್ತಿರುವುದು ಸಂಪೂರ್ಣ ಸಾತ್ವಿಕ ಶ್ರೀ ಚಕ್ರ. ಲಲಿತತ್ರಿಪುರಸಂದರಿಯಿಂದ ಶೋಣಿ ಪುರದ ಭಂಡಾಸುರನ ವಧೆಯಾದ ನಂತರ ಕಾಲಕ್ರಮೇಣ ಶಕ್ತಿಪೀಠಗಳಲ್ಲಿ, ದೇವಿಯ ದೇಗುಲಗಳಲ್ಲಿ ಶ್ರೀಚಕ್ರಾರಧಾನೆ ಮುಂದುವರೆಯಿತು. ಆದರೆ ಈ ಸ್ಥಳಗಳಲ್ಲಿ ನೆಲೆಸಿದ್ದ ದೇವಿಯು ಸೂರ್ಯಾಸ್ತದ ನಂತರ ಮಾಂಸಾನ್ನ ಪ್ರಿಯೆಯಾಗುತ್ತಿದ್ದಳು, ಬಲಿಗಳನ್ನು ಕೊಡಬೇಕಿತ್ತು. ದೈವಶಕ್ತಿಯಿಂದ ಅಸುರಶಕ್ತಿಯ ವಧೆಯ ಪರಿಣಾಮ ಗೌರಿಯು ಕಾಳಿಯಾಗುತ್ತಿದ್ದಳು, ಕಾಮಾಕ್ಷಿಯು ರಕ್ತಾಕ್ಷಿಯಾಗಿ ಬದಲಾಗುತ್ತಿದ್ದಳು.
ಈ ಸುದ್ದಿಯು ಶ್ರೀ ಶ್ರೀ ಶಂಕರಾಚಾರ್ಯರಲ್ಲಿಗೆ ತಲುಪಿ ಈ ಬಲಿ ಕೊಡುವ ಪದ್ದತಿಯನ್ನು ಸಂಪೂರ್ಣವಾಗಿ ಬದಲಿಸಲು ನಿರ್ಧರಿಸಿದರು.
ಮುಂದಿನ ಲೇಖನದಲ್ಲಿ ಸಾತ್ವಿಕ ಶ್ರೀ ಚಕ್ರದ ರಚನೆ ಹೇಗಾಯಿತು ಎಂಬುದರ ಬಗ್ಗೆ ಬರೆಯುವ ಅಪೇಕ್ಷೆ ಇದೆ. ತಿಳಿದಷ್ಟರ ಮಟ್ಟಿಗೆ ಬರೆದಿದ್ದೇನೆ. ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಳಿಸಿ.
ವಂದನೆಗಳೊಂದಿಗೆ
ಪೃಥ್ವಿ ಎಂ ಎಲ್.
ವಂದನೆಗಳೊಂದಿಗೆ
ಪೃಥ್ವಿ ಎಂ ಎಲ್.
ಬಹುತೇಕರಿಗೆ ತಿಳಿಯದ ಹೊಸ ವಿಷಯ, ತುಂಬಾ ಚೆನ್ನಾಗಿ ಮೂಡಿ ಬಂದಿದೆ
ReplyDeleteಮಧ್ಯೆ ಮಧ್ಯೆ photos ಬಂದಿದೆ, akka full expert adri blog alli. ನಿಮ್ಮ ಅಂಕಣದ ಪುಟ್ಟ ಅಭಿಮಾನಿ ನಾನು
ReplyDeleteNext time sikdaga autograph ಕೊಡಬೇಕು akka ಮರೆಯಬಾರದು
ReplyDeleteNice
ReplyDeleteVery nice and its too informative......
ReplyDeleteಸಾತ್ವಿಕ ಶ್ರೀ ಚಕ್ರದ ರಚನೆ ಹೇಗಾಯಿತು ಎಂಬುದರ ಬಗ್ಗೆ ತಿಳಿಯವ ಕೂತುಹಲ ಹೆಚ್ಚಾಗುತ್ತಿದೆ.
ReplyDeleteEditing is good and need of the hour for all...Best wishes for new article
ReplyDeleteNice pruthvi
ReplyDeleteSuper Akka....keep educating us..🤗🙂
ReplyDeleteVery nice mam...n it's tooo informative
ReplyDeleteಸಂಕ್ಷಿತ್ತವಾಗಿ ಮೂಲ ಕಥೆ ಗೆ ಧಕ್ಕೆ ಆಗದಂತೆ ಸರಳ ವಾಗಿ ವಿವರಿಸಿದ್ದೀರಿ ಪೃಥ್ವಿ.... ಧನ್ಯವಾದಗಳು... ಇನ್ನು ಇಂತಹ ವಿಚಾರಗಳನ್ನು ತಿಳಿಸಿ...
ReplyDeleteSuper prithvi
ReplyDeleteಬಲು ಸೂಕ್ಷ್ಮ ವಾದ ಅಷ್ಟೇ ಸಂಕೀರ್ಣವಾದ ವಿಷಯವನ್ನು ಬಹು ಸರಳವಾಗಿ ಪ್ರಸ್ತುತ ಪಡಿಸಿದ್ದಿರಿ.
ReplyDeleteನಿಮ್ಮ ಲೇಖನ ತುಂಬಾ ಉಪಯುಕ್ತವಾಗಿದೆ .. ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಇದೆ..
ReplyDeleteತುಂಬ ಸೊಗಸಾಗಿ ವಿವರಿಸುತ್ತಿದ್ದೀರಿ.
ReplyDeleteNice mam
ReplyDeleteಅತ್ಯಂತ ಪ್ರಯೋಗಿಕವಾಗಿದೆ
ReplyDeleteಅತ್ಯಂತ ಪ್ರಯೋಗಿಕವಾಗಿದೆ
ReplyDeleteSuperb mam.. keep writing n educating us 😊
ReplyDeleteIt’s not very easy to study & written the history but you have done exelent writing ✍️ on this Prithvi. ��
ReplyDeleteVery good article. Most of the information given was not known to me. Thanks for fresh information Mahesh
ReplyDeleteSuperb Pruthvi...😊
ReplyDeleteWhen shall we expect part 2 of this article Pruthvi
ReplyDeleteಉತ್ತಮ ಲೇಖನ ಪ್ರುಥ್ವಿ
ReplyDeleteSuper akka
ReplyDeleteVery happy to see the information hidden in complicated vedha grantha and shloka's. By mistakenly my comment is deleted Pruthvi 🙏
ReplyDeleteWe r waiting ur next article
ReplyDelete👍
ReplyDeleteNice
ReplyDelete